Wednesday, June 10, 2015

ಬದುಕಿ ಮತ್ತು ಬದುಕಲು ಬಿಡಿ

ಭಾರತ ಮಾತೆಯ ಹೆಮ್ಮೆಯ ವೈಭವೋಪೇತ ವಜ್ರ ಮುಕುಟ
ಜಮ್ಮು ಕಾಶ್ಮೀರ, ರುದ್ರ ರಮಣೀಯ ಹಿಮಾಲಯ ಪರ್ವತ

ಇದುವೇ ಧರಿತ್ರಿಯ ಮೇಲಿನ ಸ್ವರ್ಗವು, ನೀಲಕಂಠನ ತಪೋವನವು
ಅಮೃತ ಸ್ಫುರಿಸುವ ಗಂಗಾದೇವಿಯ ಉಗಮಸ್ಥಾನವು

ಅಗಾಧ ಕಾಡು, ಅಪರಿಮಿತ ಋಷಿ-ಮುನಿಗಳ ನಾಡು
ಅಪರೂಪದ ಖಗ-ಮೃಗ, ಸಂಜೀವಿನಿಯ ನೆಲೆವೀಡು

ಈ ಪವಿತ್ರ ನೆಲದಲ್ಲಿ ಜನಿಸಿದ ನಮ್ಮ ಅಣ್ಣ-ತಂಗಿಯರು 
ಪುಣ್ಯವಂತರೋ ಇಲ್ಲಾ ಶಾಪಗ್ರಸ್ತರೋ?

ಪ್ರಕೃತಿಮಾತೆ ಯಥೇಚ್ಛವಾಗಿ ನೀಡಿಹಳು ವರ 
ಮೂಲಭೂತವಾದಿಗಳು ಎಸಗುವರು ಅತ್ಯಾಚಾರ 

ನಡೆಯುತಿದೆ ಪ್ರತಿ ಕ್ಷಣವೂ, ಅಸಂಖ್ಯ ಮುಗ್ಧರ ಮಾರಣಹೋಮ
ತಾಯಿಯ ಹಾಲು ಬಿಳುಪಿನ ಸೀರೆಯಾಗಿದೆ ರಕ್ತವರ್ಣ

ಹಿಮಾಲಯ ಭಾರತಿಯ ಶಿರವು, ಕಾಶ್ಮೀರವು ಸುಂದರ ವದನ
ನರಹಂತಕರೇ ಮಾಡದಿರಿ ಆಕೆಯ ಶಿರಚ್ಛೇದನ !!!

ಸೇಡು ಸೇಡನ್ನು ಹುಟ್ಟಿಸುತ್ತದೆ ಎಂಬ ಹೈದರ್ ಸಿನಿಮಾದ ನುಡಿ
ಅರಿತು ಕೊಲೆಗಾರರೇ ಬದುಕಿ ಮತ್ತು ಬದುಕಲು ಬಿಡಿ





No comments:

Post a Comment